.jpg)
ಪ್ರೇಮಾಮೃತ ----------------೭
ಮಧ್ಯಾನ್ಹದ ವೇಳೆಯಲ್ಲಿ ಬಸ್ಸಿನ ಅಭಾವವಾದ್ದರಿಂದ, ಲಕ್ಷ್ಮಿಯು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಒಬ್ಬಳೇ ಕುಳಿತಿದ್ದಳು. ಒಂದು ಬಿಳಿಯ ಬಣ್ಣದ ಕಾರು ಮುಂದೆ ಹೋಗಿ ಹಿಂದಕ್ಕೆ ವಾಪಸ್ಸು ಬಂದಿದ್ದನ್ನು ನೋಡಿ ಗಾಭಾರಿಯಾದಳು . ಓಯ್ ಯಾಕೋ ರಾಜ ,ಬಸ್ಸು ಸಿಕ್ಕಲಿಲ್ಲವೇನೋ ? ಬಾ ನಾನು ಹೇಗೂ ಡೈರೆಕ್ಟರ್ ಆಫೀಸ್ ಗೆ ಹೋಗುತ್ತೀದ್ದೀನಿ ಅಲ್ಲಿ ತನಕ ನಿನ್ನನ್ನೂ ಬಿಟ್ಟು ಹೋಗುತ್ತೀನಿ ಎಂದಾಗ ಪ್ರೊಫೆಸರ್ ದ್ವನಿ ಕೇಳಿದಾಗ ಗಾಭರಿಯಾಗಿದ್ದ ಲಕ್ಷ್ಮಿಗೆ ಸ್ವಲ್ಪ ನೆಮ್ಮದಿ ಆಯಿತು. ಆದರೂ ಸಂಕೋಚದಿಂದ ಪರವಾಗಿಲ್ಲ ಸಾರ್ ಎನ್ನುತ್ತಾಳೆ. ಯಾಕೋ ಪುಟ್ಟ ಭಯ ಏನೋ ಅಂದಾಗ ,ಹಾಗೇನಿಲ್ಲ ಸರ್ ಎಂದು ಕಾರನ್ನು ಹತ್ತುತ್ತಾಳೆ ಲಕ್ಷ್ಮಿ. ನಂತರ ದೀಪಕ್, ಬೆಳಿಗ್ಗೆ ನಿಮ್ಮ ಮನೆಯ ಹತ್ತಿರ ಬಸ್ಸು ಎಷ್ಟು ಹೊತ್ತಿಗೆ ಇದೆ . ನಾಳೆ ೮.೩೦ಗೆ ಸರಿಯಾಗಿ ನೀನು ಕಾಲೇಜಿನಲ್ಲಿ ಇರಬೇಕು. ಅದಕ್ಕೆ ಆಯ್ತು ಸಾರ್ ಅನ್ನುತ್ತಾಳೆ . ನಾಳೆ ನೀನು ದೇವರನಾಮದ ಸ್ಪರ್ಧೆ ಗೆ ಯಾವ ಹಾಡು ಹೇಳುತ್ತೀ ? ವಾತಾಪಿ ಹೇಳೋ ಅಂದಾಗ , ಹೋಗಿ , ಪ್ರೊಫೆಸರ್ ಸರ್ ಅದನ್ನು ಎಲ್ಲರೂ ಹೇಳುತ್ತಾರೆ ಅಂದಾಗ ಆದರೇನು ಅದು ತುಂಬಾ ರಿಚ್ ಹಾಡು ಎನ್ನುತ್ತಾನೆ . ಸರಿ ಭಾವಗೀತೆಗೆ /ನಾಡಗೀತೆಗೆ ಯಾವ ಹಾಡು ಎಂದುದಕ್ಕೆ ಜೋಗದಸಿರಿಬೇಳಕಿನಲ್ಲಿ ಬಿ ಆರ್ ಛಾಯ ಅವರು ಹಾಡಿದ್ದಾರಲ್ಲ , ಅದನ್ನು ಹಾಡುತ್ತೇನೆ ಎಂದುದಕ್ಕೆ ನಕ್ಕು, ಜನಪದಗೀತೆ ಎಂದಾಗ ಇನ್ನೂ ಯೋಚಿಸಿಲ್ಲಾ ಅನ್ನುತ್ತಾಳೆ . ನಂತರ ಪುಟ್ಟು ಭರತನಾಟ್ಯ ಬರುತ್ತಾ? ಅಂತ ಕೇಳಿದ ಪ್ರೊಫೆಸರ್ ಗೆ , ಹೂಂ ಬರುತ್ತೆ , ಆದರೆ ಪಪ್ಪಾ ನೀನು ಇನ್ನುಮೇಲೆ ಡ್ಯಾ ನ್ಸ್ ಎಲ್ಲಾ ಮಾಡಬಾರದು ಕಾಲೇಜಿಗೆ ಬಂದ್ದಿದ್ದೀಯ ಚೆನ್ನಾಗಿರಲ್ಲ ಅಂದಿದ್ದಾರೆ ಅದಕ್ಕೆ ಬೇಡ ಅನ್ನುತ್ತಾಳೆ ಲಕ್ಷ್ಮಿ .ಹಾಗಾದರೆ ಒಂದು ಕೆಲಸ ಮಾಡು ಅಕಸ್ಮಾತ್ ಒಂದೆರಡು ಕಾರ್ಯಕ್ರಮದಲ್ಲಿ ನಿನಗೆ ಪ್ರಶಸ್ತಿ ಬಂದರೆ ಭರತನಾ ಟ್ಯ ವನ್ನು ಮಾಡು ಇಲ್ಲವಾದರೆ ಬೇಡ ಎಂದು ಹೇಳಿ ,ಅವಳ ಮನೆಗೆ ಸುಲಭವಾಗಿ ಬಸ್ಸು ಸಿಕ್ಕುವ ಜಾಗದಲ್ಲಿ ಇಳಿಸಿ ತಾನು ಡೈರೆಕ್ಟರ್ ಆಫಿಸೀಗೆ ಮುಂದುವರಿಯುತ್ತಾನೆ ಪ್ರೊಫೆಸ್ಸರ್.
ಮುಂದುವರಿಯುವುದು ------------
No comments:
Post a Comment